ಮಲ್ಲು ಅಂಕಲ್ - ಪದ್ಮಲ ಕಥೆ
ದೊಡ್ಡ ಬಳ್ಳಾಪುರದ ಹತ್ತಿರ ಒಂದು ಹಳ್ಳಿ. ಹಳ್ಳಿಯ ಹೆಸರು ಕಟ್ಟಿಕೊಂಡು ನಮಗೇನೂ ಆಗ ಬೇಕಿಲ್ಲ. ಅಲ್ಲೊಂದು ಹರಿಜನ ಕುಟುಂಬ. ಅಪ್ಪ, ಅಮ್ಮ ಮಾತ್ರ ಮಕ್ಕಳು ಆಮೇಲೆ ಬಂದರು. ಒಂದು ತನಗೆ ಹುಟ್ಟಿದ್ದು ಮತ್ತೊಂದು ಬೇರೆಯವರಿಗೆ. ಬೇರೆಯವರಿಗೆ ಹುಟ್ಟಿದ್ದು ನಿಜವಾಗಿಯೂ ಬೇರೆಯವರಿಗೆ ಹುಟ್ಟಿದ್ದು. ಬೆಂಗಳೂರ ಕಡೆ ಬೇರೆಯವರಿಗೆ ಹುಟ್ಟಿದ್ದು ಎಂದರೆ ಹೆಣ್ಣು ಮಗಳು ಅಂತ ಅರ್ಥ. ಒಂದಲ್ಲ ಒಂದು ದಿನ ಅವಳು ಬೇರೆಯವರ ಮನೆ ಬೆಳಗಬೇಕು ಆದ ಕಾರಣ ಆ ಮಗು ಬೇರೆಯವರಿಗೆ ಹುಟ್ಟಿದ ಮಗು ಅಂತ ಹಿರಿಯರು ಹೇಳ್ತಾರೆ. ಆದರೆ ಈ ಮಗು ಊರ ಜಮೀನ್ದಾರ ತೀಟೆ ಹೆಚ್ಚಿ ಯಾರೂ ಸಿಗದೇ ಇದ್ದಾಗ ಸುಲಭದಲ್ಲಿ ಸಿಕ್ಕಿದ ಹರಿಜನ ಹುಡುಗಿಯನ್ನು ಕೇದಾಗ ಹುಟ್ಟಿತ್ತು ಒಂದು ಬೇರೆಯವರಿಗೆ ಹುಟ್ಟಿದ ಮಗು. ಅಮ್ಮ ಮಗುವನ್ನ ಜಮೀನ್ದಾರನ ಹೆಸರಿಗೆ ಕಟ್ಟದೆ ಅಪ್ಪನ ಹೆಸರಿಗೆ ಕಟ್ಟಿದಳು. ಹೆಂಗಸರು ಇಂತ ವಿಷಯದಲ್ಲಿ ತುಂಬಾ ಹುಷಾರಿ. ಗಂಡಸು ಪಾಪ ಬಡಪಾಯಿ. ಅವನಿಗೇನು ಗೊತ್ತಾಗುತ್ತೆ ಯಾರ ಬೀಜ ನನ್ನ ಜಮೀನಿಗೆ ಬಂದಿದೇಂತ? ಎಷ್ಟೋ ಗಂಡಸರಿಗೆ ಫಲ ಸಿಕ್ಕಿದರೆ ಸಾಕು. ಬೀಜ ಯಾವುದಾದರೇನಂತೆ.
ಆದರೆ ಜಮೀನ್ದಾರ ತನ್ನ ಬೀಜಾನ ಮರೀಲಿಲ್ಲ. ಅಮ್ಮನಿಗೆ ಸಾಕಷ್ಟು ಸಹಾಯ ಮಾಡಿದ. ಮಗುವಿಗೆ ಬ್ರಾಹ್ಮಣ ಹೆಸರೂ ಕೊಟ್ಟ. ಪದ್ಮಾವತಿ ಪದ್ದಿಯಾದಳು ಆದರೆ ಪೆದ್ದಿಯಾಗಲಿಲ್ಲ. ಬೀಜದ ಗುಣ, ಸ್ಕೂಲ್ ನಲ್ಲಿ ಯಾವಾಗಲೂ ಮುಂದೆ. ಎಲ್ಲಾ ಸ್ಕಾಲರ್ ಶಿಪ್ ಗಳೂ ಇವಳಿಗೇ. ಹರಿಜನ ಹುಡುಗಿ ಇಷ್ಟು ಬುದ್ಧಿವಂತೆ ಅಂತ ಎಲ್ಲಾ ಅಮ್ಮನನ್ನ ಹೊಗಳಿದ್ದೇ ಹೊಗಳಿದ್ದು. ಹರಿಜನರ ಗಡಸುತನ, ಬ್ರಾಹ್ಮಣ ಬುದ್ಧಿ ಪಡೆದು ಪದ್ಮ ಎಸ್ಸೆಲ್ಸಿ ಯಲ್ಲಿ ಎಲ್ಲೆರಗಿಂತ ಮುಂದಿದ್ದಳು.
ಆದರೆ ಅವಳ ಊರಿನ ನೀರಿನ ಋಣ ಮುಗಿದಿತ್ತೂಂತ ಕಾಣ್ತದೆ. 'ಅಣ್ಣ' ಅನ್ನಿಸ್ಕೊಂಡೊನೆ ಒಂದು ದಿನ ತನ್ನ ಸ್ನೇಹಿತಾನ ಅವಳ ಹಾಸಿಗೆಗೆ ಕಳಿಸಿದ. ಎಷ್ಟೇ ಹೋರಾಡಿದರೂ ಪದ್ಮಳಿಗೆ ಗೆಲ್ಲಲಾಗಲಿಲ್ಲ. ಆ ದಿನ ಅವಳು ತನ್ನ ಕನ್ಯತ್ವವನ್ನ ಕಳ ಕೊಂಡ್ಳು. ಆದರೆ ಅಣ್ಣ ಅನ್ನಿಸ್ಕೊನ್ದೊನು ಸುಮ್ಮನಾಗಲಿಲ್ಲ. ಅವನಿಗೆ ಹಣದ ರುಚಿ ಹತ್ತಿತ್ತು. ಗುಂಡು ಹಾಕಲು ಸುಲಭದ ದಾರಿ ಸಿಕ್ಕಿತ್ತು. ಮೊದಲು ಸ್ನೇಹಿತರು ಆಮೇಲೆ ಸ್ನೇಹಿತರ ಸ್ನೇಹಿತರು. ಆಮೇಲೆ ... ಪದ್ಮ ಸಹಿಸುವಷ್ಟೂ ಸಹಿಸಿದಳು. ಒಂದು ದಿನ ಎದುರು ಬಿದ್ದಳು. ಫಲಿತಾಂಶ ಹದಿನೈದು ದಿನ ಹಾಸಿಗೆಯಲ್ಲಿ ಬಿದ್ದಿರಬೇಕಾಯ್ತು ಹೊಡೆತದ ಗಾಯದಿಂದ. ಹಾಸಿಗೆಯಿಂದ ಎದ್ದಾಗ ಅವಳ ಊರ ಋಣ ಮುಗಿದಿತ್ತು.
ಅದೇ ರಾತ್ರಿ ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟ ಪದ್ಮ ಮೊದಲು ಸಿಕ್ಕಿದ ಬಸ್ಸು ಹತ್ತಿದಳು. ಎಲ್ಲಿಗೆ ಹೋಗಬೇಕೂಂತ ಗೊತ್ತಿಲ್ಲ. ಆದರೆ ಬಸ್ಸು ಬೆಂಗಳೂರಿಗೆ ಹೊರಟಿತ್ತು. ಆದರೆ ಬೆಂಗಳೂರಿನ ನೀರಿನ ಋಣ ಇನ್ನೂ ಅವಳ ಪಾಲಿಗೆ ಬಂದಿರಲಿಲ್ಲ. ಬಸ್ಸು ಹುಣಸೆ ಮಾರಣ ಹಳ್ಳಿ ಹತ್ತಿರ ಕೆಟ್ಟು ನಿಂತಿತು.
ಸುತ್ತ ಮುತ್ತಲು ಬರೆ ಬಯಲು. ಎದುರುಗಡೆ ಏರ್ ಫೋರ್ಸ್ ನ ಖಾಲಿ ಖಾಲಿ ಮೈದಾನ. ಒಬ್ಬಳೇ ಹೆಣ್ಣು. ಬಸ್ಸಿನವರು ಬಸ್ಸು ಕೆಟ್ಟ ವಿಷಯ ಯೋಚನೆ ಮಾಡದೆ ಇವಳನ್ನ ಕೆಡಿಸುವ ವಿಷಯ ಯೋಚನೆ ಮಾಡ ತೊಡಗಿದರು. ಬಸ್ಸಿನಲ್ಲಿ ಕೇವಲ ಆರು ಜನರಿದ್ದರು. ಆರು ಜನರೂ ಗಂಡಸರೇ. ಡ್ರೈವರ್ ಮತ್ತು ಕಂಡಕ್ಟರ್ ಫೋನ್ ಮಾಡೋದಿಕ್ಕೆ ಏರ್ ಫೋರ್ಸ್ ಸ್ಟೇಶನ್ ಹೊರಡೋದನ್ನೇ ಕಾಯುತ್ತಿದ್ದ ಈ ಆರೂ ಜನ ಹಸಿದ ಹುಲಿಯಂತೆ ಅವಳ ಮೇಲೆ ಬೀಳಲು ಸಿದ್ಧವಾದರು
... ಮುಂದುವರಿಯುವುದು
|